ಬೆಂದಕಾಳೂರಿನಲ್ಲಿ `ಜಂಬೂಸವಾರಿ` ಹಾಡು
Posted date: 10 Thu, Oct 2013 – 08:46:35 AM

ಎಚ್.ಪಿ.ಆರ್ ಎಂಟರ್‌ಟೈನ್‌ಮೆಂಟ್ ಪ್ರೈ ಲಿ ಲಾಂಛನದಲ್ಲಿ ಎ.ಹರಿಪ್ರಸಾದ್‌ರಾವ್ ಅವರು ನಿರ್ಮಿಸುತ್ತಿರುವ ‘ಜಂಬೂಸವಾರಿ‘  ಚಿತ್ರಕ್ಕಾಗಿ ಚಂದ್ರು ಅವರು ಬರೆದಿರುವ ‘ಬೆಂದಕಾಳೂರಿನಲ್ಲಿ ಬರ್ಮಾಬಜಾರಿನಲ್ಲಿ ಸಂಜೆ ಮಾತ್ರ ಅರಳುವ ಮಲ್ಲಿಗೆ ನಾನು‘ ಎಂಬ ಹಾಡಿನ ಚಿತ್ರೀಕರಣ ಬೆಂಗಳೂರಿನ ಬಿಗೇಡ್ ರಸ್ತೆಯಲ್ಲಿನ ಫ಼್ಯೂಜನ್ ಲಾಂಜ್‌ನಲ್ಲಿ ನಡೆದಿದೆ. ಪ್ರಜ್ವಲ್, ನಿಕ್ಕಿ, ಸಾನಿಯಾ ಅಭಿನಯಿಸಿದ ಈ ಹಾಡಿಗೆ ರಾಮು ನೃತ್ಯ ನಿರ್ದೇಶನ ಮಾಡಿದ್ದಾರೆ.
  ‘ಈ ಭೂಮಿ ಆ ಭಾನು‘ ಚಿತ್ರ ನಿರ್ದೇಶಿಸಿ ಅನುಭವವಿರುವ ವೇಣುಗೋಪಾಲ್.ಕೆ.ಸಿ ಈ ಚಿತ್ರದ ನಿರ್ದೇಶಕರು. ಎಸ್.ಪ್ರೇಮಕುಮಾರ್ ಸಂಗೀತ ನಿರ್ದೇಶನದ ಈ ಚಿತ್ರಕ್ಕೆ ಪ್ರತಾಪ್ ಅವರ ಛಾಯಾಗ್ರಹಣವಿದೆ. ರಮೇಶ್‌ಬಾಬು ಸಂಕಲನ, ಹರಿಕೃಷ್ಣ ನೃತ್ಯ ನಿರ್ದೇಶನ ಹಾಗೂ ಬಾಬುಖಾನ್ ಕಲಾನಿರ್ದೇಶನವಿರುವ ಈ ಚಿತ್ರಕ್ಕೆ ಚಂದ್ರು.ಎಸ್.ಎಲ್ ಸಂಭಾಷಣೆ ಹಾಗೂ ಸಾಹಿತ್ಯ ಬರೆದಿದ್ದಾರೆ. ಪ್ರಜ್ವಲ್, ನಿಕ್ಕಿ, ಶೊಭರಾಜ್, ಅಚ್ಯುತರಾವ್, ಚೈತ್ರಾರೈ, ಮಿತ್ರ, ಸಾನಿಯಾ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed